ಇಳಕಲ್:-ನಗರದ ಎಲ್ಲ ಪತ್ರಕರ್ತರು ಶಾಸಕರಿಗೆ ಅಂಜಿ ಮನೇಲಿ ಕೂತಿದ್ದಾರೆ ನಮ್ಮ ಪಕ್ಷದ ಯಾವುದೇ ಸುದ್ದಿ ಮಾಡುವುದಿಲ್ಲ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಹುನಗುಂದ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನು ತೀವ್ರವಾಗಿ ಖಂಡಿಸಿರುವ ಸಮಸ್ತ ಪತ್ರಕರ್ತರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲರು ಬಹಿರಂಗ ಕ್ಷಮೆ ಯಾಚಿಸುವ ವೆರಗೂ ಅವರ ಸುದ್ದಿಗಳನ್ನು ಪತ್ರಿಕೆಗಳಿಗೆ ಹಾಕಲು ಬಹಿಸ್ಕರಿಸುವುದಾಗಿ ಇಳಕಲ್ ನಗರದ ಸಮಸ್ತ ಪತ್ರಕರ್ತರು ತಿಳಿಸಿದರು.
ಮಾಜಿ ಶಾಸಕರು ಕೆಲವೇ ಕೆಲವು ಪತ್ರಕರ್ತರನ್ನು ಕರೆದು,ಯಾರನ್ನು ಕರೆಯದೆ ಸಭೆ ಸಮಾರಂಭ ಮಾಡುತ್ತಾರೆ ಅವರು ಯಾರಿಗೂ ಹೇಳುವುದಿಲ್ಲ.
ಈ ರೀತಿ ಹೇಳಿಕೆ ನೀಡಿರುವುದು ಬಹಳಷ್ಟು ಪತ್ರಕರ್ತರಿಗೆ ಬೇಸರ ತಂದಿದೆ.
ಮಾಜಿ ಶಾಸಕರ ಹಿಂಬಾಲಕರು ಯಾವುದೇ ಮಾಹಿತಿಯನ್ನು ಸರಿಯಾಗಿ ಪತ್ರಕರ್ತರಿಗೆ ತಿಳಿಸುವುದುಲ್ಲ ಹೀಗಾಗಿ ಅವರ ವರದಿಗಳನ್ನು ಹೇಗೆ ಮಾಡಬೇಕು ಎಂದು ಎಲ್ಲ ಪತ್ರಕರ್ತರು ಪ್ರಶ್ನಿಸುತ್ತಾರೆ?
ಮೂರು ಬಾರಿ ಶಾಸಕರಾಗಿರುವ ಅವರು ಈ ರೀತಿ ಪತ್ರಕರ್ತರಿಗೆ ಬಹಿರಂಗವಾಗಿ ಮಾತನಾಡಿರುವುದು ಖಂಡನಿಯ ಎಂದು ಎಲ್ಲಾ ಪತ್ರಕರ್ತರು ಖಂಡಿಸಿದ್ದಾರೆ.






